top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

Answers to questions from the entire Ramayana Jai Shri Ram ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು ಜೈ ಶ್ರೀ ರಾಮ್

  • Sep 1, 2025
  • 5 min read
Answers to questions from the entire Ramayana  Jai Shri Ram  ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು  ಜೈ ಶ್ರೀ ರಾಮ್
Answers to questions from the entire Ramayana Jai Shri Ram ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು ಜೈ ಶ್ರೀ ರಾಮ್



ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು 🌺 ಜೈ ಶ್ರೀ ರಾಮ್ 🌺

Answers to questions from the entire Ramayana 🌺 Jai Shri Ram 🌺


1) ರಾಮಾಯಣ ರಚಿಸಿದವರು ಯಾರು?

ಉತ್ತರ: ವಾಲ್ಮೀಕಿ ಮಹರ್ಷಿಗಳು

2) ವಾಲ್ಮಿಕಿ ಯಾವ ವಂಶಜರು?

ಉತ್ತರ: ಭೃಗುವಂಶ

3) ವಾಲ್ಮಿಕಿಯ ತಂದೆಯ ಹೆಸರೇನು?

ಉತ್ತರ: ಪುಚೇತನ ಮಹರ್ಷಿಗಳು

4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?

ಉತ್ತರ: ಹುತ್ತ

5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?

ಉತ್ತರ: ೦೮

6)ರಾಮಾಯಣದ ಕಾಂಡಗಳು ಯಾವುವು?

ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ,

7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು?

ಉತ್ತರ : ರಾಷ್ಟ್ರಕವಿ ಕುವೆಂಪು

8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?

ಉತ್ತರ : ಕಂಬನ್

9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?

ಉತ್ತರ : ಯುದ್ದಕಾಂಡ

10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು?

ಉತ್ತರ : ತ್ರೇತಾಯುಗ

11) ರಾಮನ ವಂಶ ಯಾವುದು ?

ಉತ್ತರ : ಸೂರ್ಯವಂಶ

12) ಸೂರ್ಯವಂಶದ ಮೊದಲ ರಾಜನ ಹೆಸರು ?

ಉತ್ತರ : ಇಕ್ಷ್ವಾಕು

13) ಇಕ್ಷ್ವಾಕುವಿನ ತಂದೆ ಯಾರು ?

ಉತ್ತರ : ಸೂರ್ಯದೇವ

15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?

ಉತ್ತರ : ರಘುವಂಶ

16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?

ಉತ್ತರ : ಸತ್ಯ ಹರಿಶ್ಚಂದ್ರ

17) ದಶರಥನ ಮೂವರು ಪಟ್ಟ ಮಹಿಷಿಯರು

ಯಾರು ?

ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ

18) ದಶರಥ ಮಹಾರಜನ ತಂದೆ ಯಾರು ?

ಉತ್ತರ : ಅಜ ಮಹಾರಾಜ

19) ಕೌಸಲ್ಯೆಯ ತಂದೆ ಯಾರು ?

ಉತ್ತರ : ಭಾನುವಂತ

20) ಸುಮಿತ್ರೆಯ ತಂದೆ ಯಾರು ?

ಉತ್ತರ: ಶೂರರಾಜ

21) ಕೈಕೆಯ ತಂದೆ ಯಾರು?

ಉತ್ತರ : ಅಶ್ವಪತಿ ರಾಜ

22) ದಶರಥನು ಪ್ರಾಣಿಯನ್ನು ಕೊಲ್ಲಲೆಂದು ಹುಡಿದ್ದ ಬಾಣ ಯಾರಿಗೆ ನಾಟಿತು ?

ಉತ್ತರ : ಶ್ರವಣಕುಮಾರ

23) ದಶರಥನಿಗೆ ಪುತ್ರ ಶೋಕದಿಂದಾಗಿ ಸಾಯುವಂತೆ ಶಾಪ ನಿಡಿದ್ದು ಯಾರು ?

ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ

24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?

ಉತ್ತರ : ಪುತ್ರಕಾಮೇಷ್ಟಿ ಯಾಗ

25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?

ಉತ್ತರ : ಶೃಂಗಿ ಋಷಿಗಳು

26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು?

ಉತ್ತರ : ಅಗ್ನಿದೇವ

27) ರಾಮನು ಜನಿಸಿದ್ದು ಯಾವಾಗ ?

ಉತ್ತರ: ಚೈತ್ರಮಾಸದ 9ನೇ ದಿನ

28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?

ಉತ್ತರ : ಪುನರ್ವಸು

29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು?

ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)

30) ದಶರಥ ಮಹಾರಾಜನ ರಾಜಗುರು ಯಾರು ?

ಉತ್ತರ : ವಶಿಷ್ಠ ಮಹರ್ಷಿಗಳು

31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?

ಉತ್ತರ : ಸುಮಂತ

32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?

ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ

33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?

ಉತ್ತರ : ಬಲ ಹಾಗೂ ಅತಿಬಲಾ

34) ತಾಟಕಿಯನ್ನು ಕೊಂದಿದ್ದು ಯಾರು?

ಉತ್ತರ : ಶ್ರೀರಾಮ

35) ಸುಬಾಹುವನ್ನು ಕೊಂದಿದ್ದು ಯಾರು?

ಉತ್ತರ : ಲಕ್ಷ್ಮಣ

36) ಸುಮಿತ್ರೆಯ ಅವಳಿ ಮಕ್ಕಳು ಯಾರು?

ಉತ್ತರ : ಲಕ್ಷ್ಮಣ, ಶತ್ರುಘ್ನ

37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ?

ಉತ್ತರ : ಮಹರ್ಷಿ ವಸಿಷ್ಠರು

38) ಕೈಕೆಯಿ ಯಾರ ಮಗಳು?

ಉತ್ತರ : ಕೈಕಯ ರಾಜನ‌ ಮಗಳು

39) ಕೌಶಲ್ಯ ಯಾವ ದೇಶದವಳು ?

ಉತ್ತರ : ಕೋಸಲ ದೇಶ

40) ವಿದೇಹದ ರಾಜಧಾನಿ ಯಾವುದು?

ಉತ್ತರ : ಮಿಥಿಲೆ

46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು?

ಉತ್ತರ : ಶಿವ ಧನಸ್ಸು

47) ಭರತನ ಹೆಂಡತಿ ಯಾರು?

ಉತ್ತರ : ಮಾಂಡವಿ

48) ಶತ್ರುಘ್ನನ ಹೆಂಡತಿ ಯಾರು?

ಉತ್ತರ : ಶೃತಕಿರ್ತಿ

49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?

ಉತ್ತರ : ಕ್ಕುಷದ್ವಜನ ಮಕ್ಕಳು

50) ಪರಶುರಾಮರು ಯಾವ ವಂಶದವರು?

ಉತ್ತರ : ಭೃಗು ವಂಶ

41) ಜನಕ ಮಹಾರಾಜನ ಪತ್ನಿ ಯಾರು ?

ಉತ್ತರ : ಸುನಯನಾ ದೇವಿ

42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ?

ಉತ್ತರ : ವಿದೇಹ

43) ವೈದೇಹಿ ಯಾರು ?

ಉತ್ತರ : ಸೀತಾಮಾತೆ

44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?

ಉತ್ತರ : ಊರ್ಮಿಳಾ

45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?

ಉತ್ತರ : ಭೂಮಿಯಲ್ಲಿ

51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?

ಉತ್ತರ : ಗೌತಮ ಮಹರ್ಷಿಗಳು

52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?

ಉತ್ತರ: ಶ್ರೀರಾಮನಿಂದ

53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?

ಉತ್ತರ : ಶತಾನಂದ

54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?

ಉತ್ತರ : 21 ಬಾರಿ

55) ಚಿರಂಜೀವಿಗಳು ಎಷ್ಟು ಮಂದಿ?

ಉತ್ತರ : 7 ಜನ

56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?

ಉತ್ತರ : ಎರಡನೆಯ ಭಾಗ

57) ರಾಮಾಯಣದ ಮೊದಲ ಭಾಗದ ಹೆಸರೇನು ?

ಉತ್ತರ : ಬಾಲಕಾಂಡ

58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?

ಉತ್ತರ : ರಾಜಗುರುಗಳಾದ ವಶಿಷ್ಠರಿಗೆ

59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?

ಉತ್ತರ : ಶಂಬರಾಸುರ

60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?

ಉತ್ತರ : ದಶರಥ ಮಹಾರಾಜ

61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?

ಉತ್ತರ : ದೇವೇಂದ್ರ

62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?

ಉತ್ತರ: 2

63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?

ಉತ್ತರ : ಸೌಮಿತ್ರಿ

64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು?

ಉತ್ತರ : ಅಂದಿನ ಸೂರ್ಯಾಸ್ತ

65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?

ಉತ್ತರ : ಶೃಂಗವೇರಪುರ

66) ಶೃಂಗವೆರಪುರ ಎಲ್ಲಿದೆ ?

ಉತ್ತರ: ಗಂಗಾನದಿಯ ತಟದಲ್ಲಿ

67) ನಿಷಾದದ ರಾಜನ ಹೆಸರೇನು ?

ಉತ್ತರ : ಗುಹ

68) ಗುಹನ ವೃತ್ತಿ ಏನು?

ಉತ್ತರ: ಅವನೊಬ್ಬ ಬೇಡ

69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?

ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ

70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?

ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು

76) ಬೃಹಸ್ಪತಿಯ ಮಗ ಯಾರು?

ಉತ್ತರ : ಭಾರದ್ವಾಜ ಋಷಿಗಳು

77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?

ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ

78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು?

ಉತ್ತರ : ಚಿತ್ರಕೂಟ ಪರ್ವತದ ಬಳಿ

79) ದಶರಥನ ಅಂತ್ಯ ಹೇಗಾಯಿತು?

ಉತ್ತರ : ಪುತ್ರ ವಿರಹದಿಂದ

80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?

ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.

71) ದೋಣಿ ನಡೆಸುವ ಅಂಬಿಗನ ಹೆಸರೇನು ?

ಉತ್ತರ : ಕೇವತ

72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?

ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ

73) ಕೇವತನ ಭಯ ನಿಜವಾದುದೇ?

ಉತ್ತರ : ಇಲ್ಲ

74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?

ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ

75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು

ಉತ್ತರ : ಪಾದಗಳನ್ನು ಯೊಳೆದದ್ದು

81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?

ಉತ್ತರ : ಭಾರತ

82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?

ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ

83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?

ಉತ್ತರ : ರಾಮನ ಪಾದುಕೆಗಳು

84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?

ಉತ್ತರ : ರಾಜಗುರು ವಶಿಷ್ಠರು

85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ?

ಉತ್ತರ: ನಂದಿಗ್ರಾಮ

101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?

ಉತ್ತರ : ಗೋದಾವರಿ

102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?

ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ

103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?

ಉತ್ತರ : ದಶರಥನ ಸ್ನೇಹಿತ ಎಂದು

104) ಪುಲಸ್ತ್ಯರು ಯಾರ ಮಗ?

ಉತ್ತರ : ಬ್ರಹ್ಮದೇವರ ಮಾನಸಪುತ್ರರು

105) ಪುಲಸ್ತ್ಯರ ಮಗ ಯಾರು ?

ಉತ್ತರ : ವಿಶ್ರವಸು

106) ವಿಶ್ರವಸುವಿನ ಪತ್ನಿ ಯಾರು?

ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ

107) ವೀಶ್ರವಸುವಿನ ಮಗ ಯಾರು?

ಉತ್ತರ : ವೈಶ್ರವನ

108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?

ಉತ್ತರ : ಕುಭೇರ

109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?

ಉತ್ತರ : ಪುಷ್ಪಕ ವಿಮಾನ

110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?

ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ

111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?

ಉತ್ತರ : ಕುಭೆರ

112) ವಿಶ್ರವಸು ಹಾಗು ಕೈಕಸಿಯ ಮಗ ಯಾರು?

ಉತ್ತರ : ರಾವಣ

113) ಕೈಕಸಿ ಯಾರ ಮಗಳು?

ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು

114) ಸುಮಾಲಿಯ ಸೋದರರು ಎಷ್ಟು ಮಂದಿ?

ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ)

115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು?

ಉತ್ತರ: ಸುಖೇಶನೆಂಬ ರಾಕ್ಷಸ

116) ರಾವಣನ ಮೂಲ ಹೆಸರೇನು?

ಉತ್ತರ : ದಶಕಂಠ/ ದಶಾನನ

117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು?

ಉತ್ತರ: ತನಗೆ ಸಾವು ಬರಬಾರದು ಎಂದು

118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?

ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ

118) ರಾವಣ ಕೇಳಿದವರ ದೊರೆಯಿತೇ?

ಉತ್ತರ : ಇಲ್ಲ

119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು?

ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ

120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?

ಉತ್ತರ : ಮನುಷ್ಯ

121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ?

ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ

122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು?

ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು

123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?

ಉತ್ತರ : ಸರಸ್ವತಿ ದೇವಿ

124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?

ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ

125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?

ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ

126) ರಾವಣನಿಗೆ ಕುಬೇರನು ಏನಾಗಬೇಕು?

ಉತ್ತರ : ಅಣ್ಣ

127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ?

ಉತ್ತರ : ಕುಬೇರನ ಮೇಲೆ

128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ?

ಉತ್ತರ : ಕೈಕಸಿ

129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?

ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ

130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು

ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ

131) ಮಂಡೋದರಿ ಯಾರ ಮಗಳು ?

ಉತ್ತರ : ಮಯ ಎಂಬ ರಾಕ್ಷಸನ ಮಗಳು

132) ಮಂಡೋದರಿಯ ತಾಯಿ ಯಾರು?

ಉತ್ತರ : ಹೇಮಾ ಎಂಬ ಅಪ್ಸರೆ

133) ಕುಂಭಕರ್ಣನ ಹೆಂಡತಿ ಯಾರು?

ಉತ್ತರ : ವಿದ್ಯುಜ್ಜಿಹ್ವೆ

134) ವಿಭೀಷಣನ ಪತ್ನಿ ಯಾರು?

ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ

135) ವಿಭೀಷಣನ ಮಾವ ಯಾರು ?

ಉತ್ತರ : ಶೈಲೂಷ

136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?

ಉತ್ತರ : ತಂದೆ ವಿಶ್ರವಸುವಿನ ಮಾತಿಗೆ

137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?

ಉತ್ತರ : ಅಲ್ಕ ನಗರಿಯಲ್ಲಿ

138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?

ಉತ್ತರ : ಮಂದಾಕಿನಿ

139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದ


1 Comment

Rated 0 out of 5 stars.
No ratings yet

Add a rating
gondola.snaps_5m
Sep 02, 2025
Rated 5 out of 5 stars.

Good

Like
bottom of page